ರಜನಿಕಾಂತ್ ರನ್ನು ಭೇಟಿಯಾಗಲಿರುವ ಅಮಿತ್ ಶಾ

Prasthutha|

ಬಿಜೆಪಿ-ಅನ್ನಾ ಡಿಎಂಕೆ ಸಂಬಂಧಗಳು ಕುಸಿಯುತ್ತಿರುವ ಲಕ್ಷಣಗಳಿರುವುದರಿಂದ ಅಮಿತ್ ಶಾ ಶನಿವಾರ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರನ್ನು ವೆಟ್ರಿವೇಲ್ ಯಾತ್ರೆ ನಡೆಸುತ್ತಿರುವಾಗ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಅಣ್ಣಾ ಡಿಎಂಕೆ ಜೊತೆಗಿನ ಮೈತ್ರಿ ಮುಂದುವರಿಸುವ ಕುರಿತು ಅಮಿತ್ ಶಾ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಮಿತ್ ಶಾ ಅವರು ನಟ ರಜನೀಕಾಂತ್ ಅವರನ್ನೂ ಭೇಟಿ ಮಾಡಲಿದ್ದಾರೆ.

- Advertisement -

ಅಮಿತ್ ಶಾ ಅವರು ಕೋರ್ ಕಮಿಟಿ ಸದಸ್ಯರು, ರಾಜ್ಯ ಸಮಿತಿ ಸದಸ್ಯರು ಮತ್ತು ಕ್ಷೇತ್ರದ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮಿತ್ ಷಾ ಚೆನ್ನೈಗೆ ಭೇಟಿ ನೀಡುವುದು ಇದು ಮೊದಲ ಬಾರಿಯಾಗಿದೆ. ಅಮಿತ್ ಶಾ ಅವರು ತಮಿಳುನಾಡು ಭೇಟಿಯಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Join Whatsapp