ಬೀದಿಗೆ ಬಂದ ಕಾಂಗ್ರೆಸ್ ಒಳಜಗಳ: ಕಪಿಲ್ ಸಿಬಲ್ ಗೆ ಪಕ್ಷ ಬಿಟ್ಟು ಹೊರನಡೆಯಬಹುದು ಎಂದ ಕಾಂಗ್ರೆಸ್ ನಾಯಕ

Prasthutha|


ಬಿಹಾರ ಸೋಲಿನ ನಂತರ ಕಾಂಗ್ರೆಸ್‌ನಲ್ಲಿ ಪ್ರಾರಂಭವಾದ ಸ್ವಯಂ ವಿಮರ್ಶೆ ಮತ್ತು ವಾಗ್ವಾದಗಳು ತೀವ್ರವಾಗಿ ಮುಂದುವರಿಯುತ್ತಿದೆ. ಕಾಂಗ್ರೆಸ್‌ನ ನಾಯಕ ಆದಿರ್ ರಂಜನ್ ಚೌಧರಿ, ಕಪಿಲ್ ಸಿಬಲ್ ಅವರನ್ನು ಉಲ್ಲೇಖಿಸಿ ಸುಮ್ಮನೆ ಕುಳಿತು ಟೀಕಿಸುವವರು ಕಾಂಗ್ರೆಸ್ ತೊರೆಯಬಹುದು ಅಥವಾ ಹೊಸ ಪಕ್ಷವೊಂದನ್ನು ಕಟ್ಟಬಹುದು ಎಂದು ಹೇಳಿದ್ದಾರೆ.
“ಕಾಂಗ್ರೆಸ್ ತಮಗೆ ಸರಿಯಾದ ಪಕ್ಷವಲ್ಲವೆಂದು ಯಾವುದಾದರೂ ನಾಯಕರು ಭಾವಿಸುವುದಾದರೆ ತಮಗೆ ಪ್ರಗತಿಪರವೆಂದು ಅನಿಸುವ ಮತ್ತು ತಮ್ಮ ಹಿತಾಸಕ್ತಿಗೆ ಪೂರಕವಾದ ಹೊಸ ಪಕ್ಷವನ್ನು ಕಟ್ಟಬಹುದು ಅಥವಾ ಯಾವುದಾದರೂ ಪಕ್ಷವನ್ನು ಸೇರಬಹುದು. ಆದರೆ ಇಂತಹ ಮುಜುಗರವುಂಟುಮಾಡುವ ಚಟುವಟಿಕೆಯಲ್ಲಿ ತೊಡಗಬಾರದು. ಅದು ಪಕ್ಷದ ವಿಶ್ವಾಸಾರ್ಹತೆಯನ್ನು ನಾಶಮಾಡುತ್ತದೆ” ಎಂದು ಅವರು ಹೇಳಿದರು.

- Advertisement -

ಬಿಹಾರ ಸೇರಿದಂತೆ ಚುನಾವಣೆಗಳಲ್ಲಿ ಸೋಲಿನ ನಂತರ ಕಪಿಲ್ ಸಿಬಲ್ ನಾಯಕತ್ವದ ಬಗ್ಗೆ ಟೀಕಿಸಿದ್ದರು. ಇವರಿಗೆ ಬೆಂಬಲವಾಗಿ 22 ವಿಮರ್ಶಕರು ಸೋನಿಯಾ ಗಾಂಧಿಗೆ ಪತ್ರ ಬರೆದಾಗ ವಿವಾದ ಉಲ್ಬಣಗೊಂಡಿತು. ಏನನ್ನೂ ಮಾಡದೆ ಟೀಕಿಸುವುದು ಸರಿಯಲ್ಲ ಎಂದು ಅಧೀರ್ ರಂಜನ್ ಚೌಧರಿ ಅವರ ಪ್ರತಿಕ್ರಿಯೆ. ಮೊದಲು ಕೆಲಸ ಮಾಡಿ ನಂತರ ಟೀಕಿಸುವುದು ಸರಿಯಾದ ಕ್ರಮ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಅಶೋಕ್ ಗೆಹ್ಲೋಟ್, ಸಲ್ಮಾನ್ ಖುರ್ಷಿದ್ ಮತ್ತು ತಾರಿಕ್ ಅನ್ವರ್ ಕೂಡ ಕಪಿಲ್ ಸಿಬಲ್ ಅವರ ಹೇಳಿಕೆಯನ್ನು ವಿರೋಧಿಸಿದ್ದರು.

Join Whatsapp