ನಕಲು ಮಾಡಲು ಬುದ್ಧಿವಂತಿಕೆಯ ಅಗತ್ಯವಿದೆ| ಬಿಜೆಪಿಯನ್ನು ಕೆಣಕಿದ ಕೆಟಿಆರ್

Prasthutha|

ಕೆ.ಟಿ.ರಾಮರಾವ್ (ಕೆಟಿಆರ್) ಅವರು, ಟಿ.ಆರ್.ಎಸ್ ಸರ್ಕಾರ ಮಾಡಿದ ಕೆಲಸ ಕಾರ್ಯಗಳ ಚಿತ್ರಗಳನ್ನು ಆಯ್ಕೆ ಮಾಡಿದ್ದಕ್ಕಾಗಿ ಬಿಜೆಪಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

- Advertisement -

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿ.ಹೆಚ್.ಎಂ.ಸಿ) ಚುನಾವಣೆಗೆ ಬಿಜೆಪಿ ತನ್ನ ಮತದಾನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ಕೆ.ಟಿ.ಆರ್ ಅವರ ಹೇಳಿಕೆಗಳು ಬಂದವು.

ಟಿ.ಆರ್.ಎಸ್ ನ ಕಾರ್ಯಕಾರಿ ಅಧ್ಯಕ್ಷರಾದ ಕೆಟಿಆರ್, ಜನಪ್ರಿಯ ಹಿಂದಿ ನಾಣ್ಣುಡಿ “ನಕಲ್ ಕರ್ನೆ ಕೋ ಭಿ ಅಕಲ್ ಚಾಹಿಯೆ” ಅಂದರೆ ನಕಲು ಮಾಡಲು ಕೂಡ ಬುದ್ಧಿವಂತಿಕೆಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

“ಆತ್ಮೀಯ ಬಿಜೆಪಿ ಪ್ರಣಾಳಿಕೆ ಬರಹಗಾರರೇ, ನಿಮ್ಮ ಜಿ.ಎಚ್.‌ಎಂ.ಸಿ ಪ್ರಣಾಳಿಕೆಯಲ್ಲಿ ಟಿ.ಆರ್‌.ಎಸ್ ಸರ್ಕಾರ ಮಾಡಿದ ಕೆಲಸ ಕಾರ್ಯಗಳ ಚಿತ್ರಗಳನ್ನು ನೀವು ಆರಿಸಿದ್ದಕ್ಕೆ ಸಂತೋಷವಾಗಿದೆ. ನಾವು ಇದನ್ನು ನಮ್ಮ ಕೆಲಸಕ್ಕೆ ಅಭಿನಂದನೆಯಾಗಿ ತೆಗೆದುಕೊಳ್ಳುತ್ತೇವೆ” ಎಂದು ಅವರು ಬರೆದಿದ್ದಾರೆ.

Join Whatsapp