ಕಲ್ಲಡ್ಕ | ಸಂಘಪರಿವಾರದ ಸದಸ್ಯರಿಂದ ದನ ಕಳ್ಳತನಕ್ಕೆ ಯತ್ನ | ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Prasthutha|

ಬಂಟ್ವಾಳ :  ದನ ಕದಿಯಲು ಪ್ರಯತ್ನಿಸಿದ ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಕಲ್ಲಡ್ಕದ ಕುಂಟಿಬಾಪು ಎಂಬಲ್ಲಿ ನಡೆದಿದೆ.

- Advertisement -

ವಶಕ್ಕೆ ಪಡೆಯಲಾದ ಆರೋಪಿಗಳಲ್ಲಿ ನವೀನ್, ಮಾಧವ ಸುಧೆಕಾರ್ ಸಂಘಪರಿವಾರದ ಸದಸ್ಯರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಪಿಗಳು ಬೀದಿ ಬದಿ ಮೇಯುತ್ತಿದ್ದ ದನವೊಂದನ್ನು ಪಿಕಪ್ ಗೆ ಲೋಡ್ ಮಾಡಿದ್ದು ಈ‌ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂಘ ಪರಿವಾರದವರೆನ್ನಲಾದ ಆರೋಪಿಗಳ ಕೃತ್ಯದಿಂದ ಸ್ಥಳೀಯರಲ್ಲಿ ಹಲವು ಸಂಶಯಗಳು ಹಬ್ಬಿವೆ. ಕೋಮು ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಈದ್ ಮೀಲಾದ್ ಸಂದರ್ಭ ಈ ರೀತಿ ದನ ಕಳ್ಳತನ ಮಾಡಿ, ಶಾಂತಿ ಕದಡುವ ಷಡ್ಯಂತ್ರ ನಡೆದಿದೆಯೇ ಎಂಬ ಸಂದೇಹ ಸ್ಥಳೀಯರನ್ನು ಕಾಡಿದೆ.

Join Whatsapp